ಕುಂದಾಪುರ : ಕುಂದಾಪುರದ ಅಪೂರ್ವ ಚಿನ್ನದ ಅಂಗಡಿಗೆ ಮಹಿಳೆಯರಿಬ್ಬರು ಗ್ರಾಹಕರಂತೆ ಬಂದು ಹಳೆಯ ಚಿನ್ನ ಇದೆ ಎಂದು ಅದನ್ನು ಕೊಟ್ಟು ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿ ಸುಮಾರು 2,50,000 ಲಕ್ಷ ರೂ. ವಂಚಿಸಿ ಪರಾರಿಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಮಹಿಳೆ ನಕಲಿ ಚಿನ್ನವನ್ನು ತೋರಿಸಿ ಅಂಗಡಿ ಮಾಲೀಕರು ಆ ಚಿನ್ನದಲ್ಲಿ ಹಾಲ್ ಮಾರ್ಕ್ ಇದೆಯೇ ಎಂದು ಪರಿಶೀಲಿಸಿ ಅದನ್ನು ತೆಗೆದುಕೊಂಡು ಅವರಿಗೆ ಹೊಸ ಚಿನ್ನ ಕೊಟ್ಟು ಕಳುಹಿಸಿದಾಗ ಅವರಿಗೆ ಆದ ಮೋಸ ತಡವಾಗಿ ಬೆಳಕಿಗೆ ಬಂದಿದೆ. ಚಿನ್ನ ಪಡೆದ ಅಂಗಡಿ ಮಾಲೀಕ ನಂತರ ಪರಿಶೀಲಿಸಿದಾಗ ಅದು ಬರಿ ತಾಮ್ರ ಎಂದು ರಿಪೋರ್ಟ್ನಲ್ಲಿ ಬಂದಿದೆ.
 
			        


 
			         
                        
 
                        
