115
ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿ ಶ್ರೀಕೃಷ್ಣದೇವರ ಮಠದ ಚಂದ್ರ ಶಾಲೆಯಲ್ಲಿ ಸೋಸಲೇ ಶ್ರೀ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿದರು.
ಪರ್ಯಾಯ ಪುತ್ತಿಗೆ ಉಭಯ ಮಠಾಧೀಶರು ದೇವರ ದರ್ಶನ ಮಾಡಿದರು. ಪೂಜ್ಯ ವ್ಯಾಸರಾಜ ಸ್ವಾಮಿಗಳ ಪರಸ್ಪರ ಪ್ರಸಾದಗಳನ್ನು ಸ್ವೀಕರಿಸಿದರು. ಶ್ರೀಗಳನ್ನು ಪಟ್ಟದ ದೇವರ ಸಹಿತ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು ಮತ್ತು ಪರ್ಯಾಯ ಮಠದಿಂದ ವಿಶೇಷ ಗೌರವಾದರಗಳನ್ನು ಸಲ್ಲಿಸಲಾಯಿತು.