101
ಉಡುಪಿ : ಉತ್ತರ ಭಾರತದಲ್ಲಿ ಭಾಗವತ ಸಪ್ತಾಹದಿಂದ ಹೆಸರುವಾಸಿಯಾಗಿರುವ ಸಾದ್ವಿ ಸರಸ್ವತಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅನಂತರ ಗೀತಾಮಂದಿರದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು. ಶ್ರೀಗಳು ಸಂಕಲ್ಪಿಸಿರುವ ಕೋಟಿಗೀತಾ ಲೇಖನವನ್ನು ಪ್ರಶಂಸಿಸಿ ಗೀತಾ ಲೇಖನ ದೀಕ್ಷೆಯನ್ನು ಸ್ವೀಕರಿಸಿದರು. ಮಠದ ವತಿಯಿಂದ ಸಾಧ್ವಿ ಅವರನ್ನು ಗೌರವಿಸಲಾಯಿತು.