ಗುರುಪುರ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕೊಪ್ಪ ಪರಿಶಿಷ್ಟ ಜಾತಿ ಕಾಲೊನಿ ಮತ್ತು ಮೂಳೂರು ಮಠದ ಸೈಟ್ನ ಶಿವಗಿರಿ ಬಡಾವಣೆಯಲ್ಲಿ ತಲಾ 9 ಮತ್ತು 6 ಲಕ್ಷ ರೂ ವೆಚ್ಚದ 2 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ನ. 18ರಂದು ಗುದ್ದಲಿ ಪೂಜೆ ನೆರವೇರಿಸಿದರು.

ಎರಡೂ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕರು ಒದಗಿಸಿರುವ ಒಟ್ಟು 15 ಲಕ್ಷ ರೂ ಅನುದಾನದಲ್ಲಿ ನಡೆಯಲಿದೆ. ಗುರುಪುರ ಪಂಚಾಯತ್ ಸದಸ್ಯರಾದ ಸುನಿಲ್ ಸುವರ್ಣ, ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ನಳಿನಿ ಶೆಟ್ಟಿ, ಪಕ್ಷ ಪ್ರಮುಖರು ಹಾಗೂ ಸ್ಥಳೀಯರು ನಾಗರಿಕರು ಉಪಸ್ಥಿತರಿದ್ದರು.
