Home » ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

by NewsDesk

ಮೂಲ್ಕಿ : ಒಂಬತ್ತು ಮಾಗಣೆಯ ಒಡತಿ ಮಲ್ಲಿಗೆ ಪ್ರಿಯೆ ಜಲದುರ್ಗೆ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಬ್ರಹ್ಮರಥೋತ್ಸವದ ಮುನ್ನಾ ದಿನವಾದ ಗುರುವಾರ ಚೆಂಡು ಮಲ್ಲಿಗೆ ಹೂವು ಅಪಾರ ಭಕ್ತರ ಭಕ್ತಿಯ ಸಮರ್ಪಣೆಯಾಗಿ ನಡೆದಿದೆ.

ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮಲ್ಲಿಗೆ ಚೆಂಡುಗಳು ದೇವಿಗೆ ಸಮರ್ಪಣೆಯಾಗಿದೆ ಎಂದು ದೇವಳದ ಮೂಲಗಳು ತಿಳಿಸಿವೆ.

ದೇವಳದ ಕೇಂದ್ರದಲ್ಲಿ ಸ್ವಯಂ ಸೇವಕರು ಭಕ್ತರಿಂದ ಮಲ್ಲಿಗೆ ಸ್ವೀಕರಿಸಿದರು. ದೇವಸ್ಥಾನದ ಒಳಗಿನ ಸುತ್ತು ಪೌಳಿಯ ಎರಡು ಬದಿಯಲ್ಲಿ ಜೋಡಿಸಲಾದ ಮಲ್ಲಿಗೆ ಹೂವುಗಳನ್ನು ದೇವರ ಗರ್ಭಗುಡಿಯ ಒಳಗೆ ಇರಿಸಿ ಶಯನೋತ್ಸವ ನಡೆಯಿತು.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಮುಂಬಯಿ ಮತ್ತು ಬೆಂಗಳೂರಿನ ಭಕ್ತರಿಂದಲೂ ದೇವಿಯ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಣೆಯಾಯಿತು. ಭಕ್ತರಿಗೆ ಮಲ್ಲಿಗೆ ದೊರಕುವಂತಾಗಲು ದೇವಸ್ಥಾನದ ಪರಿಸರದಲ್ಲಿ ಹಲವಾರು ಮಲ್ಲಿಗೆ ಅಂಗಡಿಗಳನ್ನು ತೆರೆಯಲಾಗಿತ್ತು. ಹೆಚ್ಚಿನ ಅಂಗಡಿಗಳಲ್ಲಿ ರಾತ್ರಿಯ ವೇಳೆ ಮಲ್ಲಿಗೆ ಮುಗಿದಿತ್ತು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb