ಬೆಂಗಳೂರಿನಲ್ಲಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ವತಿಯಿಂದ “ಯಕ್ಷ ಪಕ್ಷ””

ಬೆಂಗಳೂರು : ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರಿನ ಇಂಡಿಯನ್‌ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿಯಲ್ಲಿ ತಾಳಮದ್ದಲೆ ಕೂಟ ಆಯೋಜಿಸಿದೆ.

“ಯಕ್ಷ ಪಕ್ಷ” ಹೆಸರಿನಲ್ಲಿ ಸಂಸ್ಥೆಯು ವಿವಿಧ ಕಡೆಗಳಲ್ಲಿ 15 ತಾಳಮದ್ದಳೆ ಕೂಟವನ್ನು ನಡೆಸುತ್ತಿದ್ದು, ಇದರ 8ನೇ ಕೂಟವಾಗಿ ದಿನಾಂಕ 28 ಜೂನ್ 2024ರಂದು ಕವಿ ಮೂಲಿಕೆ ರಾಮಕೃಷ್ಣನವರ “ಸುಧನ್ವ ಮೋಕ್ಷ” ಜರುಗಲಿದೆ.

ಹಿಮ್ಮೇಳದಲ್ಲಿ ಶ್ರೀ ಅನಂತ ಹೆಗಡೆ, ದಂತಳಿಗೆ ಹಾಗೂ ಶ್ರೀ ಎ.ಪಿ ಫಾಟಕ್, ಕಾರ್ಕಳ ಮತ್ತು ಅರ್ಥಧಾರಿಗಳಾಗಿ ಶ್ರೀ ರಾಧಾಕೃಷ್ಣ ಕಲ್ಟಾರ್, ಶ್ರೀ ಹರೀಶ್ ಬೊಳಂತಿಮೊಗರು, ಶ್ರೀ ಅಜಿತ ಕಾರಂತ, ಶ್ರೀಮತಿ ಅಶ್ವಿನಿ ಆಚಾರ್ಯ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: 9448696624, 9940469916.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

ಆಸ್ತಿಗಾಗಿ ಹೆಣ್ಮಕ್ಕಳ ಕಾಟ; ಬೀದಿಪಾಲಾದ ತಾಯಿ ಹಾಗೂ ಮಗನನ್ನು ರಕ್ಷಿಸಿದ ವಿಶು ಶೆಟ್ಟಿ

18 ಶಾಸಕರ 6 ತಿಂಗಳ ಅಮಾನತು ಪ್ರಕರಣ; ವರ್ತನೆ ಪುನರಾವರ್ತಿಸಿದರೆ ಮತ್ತೆ ಕಠಿಣ ಕ್ರಮ: ಖಾದರ್