ನಾಗರ ಪಂಚಮಿಯಂದು ಜೀವಂತ ನಾಗನಿಗೆ ಪೂಜೆ

ಉಡುಪಿಯ ಕಾಪು ಮಜೂರಿನಲ್ಲಿರುವ ಗೋವರ್ಧನ್ ರಾವ್ ಅವರ ಮನೆಯಲ್ಲಿ ನಾಗರ ಪಂಚಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸಲಾಯಿತು, ಹಾವುಗಳಿಗೆ ಜಲಾಭೀಷೇಕ ಮತ್ತು ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.

ಗೋವರ್ಧನ್ ರಾವ್ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿ. ಗಾಯಗೊಂಡ ಹಾವುಗಳನ್ನು ಚಿಕಿತ್ಸೆ ನೀಡಿ, ಅವುಗಳ ಆರೈಕೆಯಲ್ಲಿ ತೊಡಗಿರುವ ಅವರು, ಈಗಾಗಲೇ ಆರು ಹಾವುಗಳನ್ನು ಆರೈಕೆ ಮಾಡುತ್ತಿದ್ದಾರೆ.

ವಾಹನಗಳ ಅಡಿಗೆ ಸಿಲುಕಿದ, ನಾಯಿ ಕಡಿತಕ್ಕೆ ತುತ್ತಾದ, ಅಥವಾ ಇತರ ಪ್ರಾಣಿಗಳಿಂದ ಗಾಯಗೊಂಡ ಹಾವುಗಳಿಗೆ ಗೋವರ್ಧನ್ ರಾವ್ ಚಿಕಿತ್ಸೆ ನೀಡುತ್ತಿದ್ದು, ನಾಗರ ಪಂಚಮಿಯಂದು ಹಾವು ಇದ್ದರೆ ಅದಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಅವರು ಮುಂದುವರಿಸಿದ್ದಾರೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!