ತುಳು ರಂಗಭೂಮಿ ಕಲಾವಿದ ಕೆ. ಎಸ್.‌ ಪ್ರಸನ್ನ ನಿಧನ

ಕಾರ್ಕಳ : ಕಾರ್ಕಳ ಪತ್ತೊಂಜಿಕಟ್ಟೆ ಗುಂಡ್ಯ ನಿವಾಸಿ ತುಳು ರಂಗಭೂಮಿ ಕಲಾವಿದ ಕೆ. ಎಸ್.‌ ಪ್ರಸನ್ನ (53ವ) ಕಿನ್ನಿಗೋಳಿ ಅವರು ಹೃದಯಾಘಾತದಿಂದ ನಿಧನ‌ ಹೊಂದಿದರು.

ನಾಟಕ ರಂಗದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಇವರು ಆ. 7ರಂದು ಇಹಲೋಕ ತ್ಯಜಿಸಿದ್ದಾರೆ.

ಕಲಾರಂಗ, ಅಭಿನಯ ಕಲಾವಿದೆರ್ ಕಾರ್ಲ ಸೇರಿದಂತೆ ವಿವಿಧ ತಂಡಗಳಲ್ಲಿ ಅಭಿನಯಿಸಿರುವ ಇವರು ರಂಗಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ಖ್ಯಾತಿಯನ್ನು ಪಡೆದಿದ್ದರು.

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ