ತಿರುಪತಿಗೆ ಹೊರಟ ಯುವಕರ ತಂಡದಿಂದ ಮೃತ ಕೋತಿಯ ಅಂತ್ಯ ಸಂಸ್ಕಾರ

ತಿರುಪತಿಗೆ ಹೊರಟಿದ್ದ ಯುವಕರ ತಂಡವೊಂದು ಮೃತ ಕೋತಿಯೊಂದರ ಅಂತ್ಯ ಸಂಸ್ಕಾರ ನಡೆಸಿದೆ.

ಸಾಸ್ತಾನದಿಂದ ತಿರುಪತಿಗೆ ನಡೆಸಿಕೊಂಡು ‌ಹೋಗುತ್ತಿದ್ದ ಲಕ್ಷ್ಮೀನಾರಾಯಣ ರಾವ್ ನೇತೃತ್ವದ ಯುವಕರ ಭಜನಾ ತಂಡಕ್ಕೆ ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟ ಕೋತಿಯ ಕಳೆಬರಹ‌ ಕಂಡಿದೆ. ಕೂಡಲೇ ಕೋತಿಯ ಮೃತದೇಹವನ್ನ ಅಲ್ಲೇ ಸಮೀಪದಲ್ಲೇ ಮಣ್ಣು ಮಾಡುವ ಮೂಲಕ ಅಂತ್ಯ ಸಂಸ್ಕಾರ ‌ನಡೆಸಿರುವ ಯುವಕರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತ ವಾಗಿದ್ದು ಅಂತ್ಯ ಸಂಸ್ಕಾರದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ