ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಪತ್ತೆ

ಹೆಬ್ರಿ : ಹೆಬ್ರಿ ತಾಲೂಕಿನ ಬಲ್ಲಾಡಿ ಪ್ರದೇಶದಲ್ಲಿ, ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ(85 ವರ್ಷ) ಅವರ ಮೃತದೇಹ ಪತ್ತೆಯಾಗಿದೆ.

ಬಲ್ಲಾಡಿ ಪರಿಸರದ ಗದ್ದೆ ಬದಿಯಲ್ಲಿ ವೃದ್ಧೆಯ ದೇಹ ಪತ್ತೆಯಾಗಿದ್ದು, ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅವರು ಸಾವಿಗೀಡಾಗಿದ್ದು ಭಾನುವಾರ ಮಧ್ಯಾಹ್ನದ ಧಾರಾಕಾರ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಿಂದಾಗಿ ಸಂಭವಿಸಿದೆ.

ಆಗುಂಬೆ ಘಾಟಿ ಪ್ರದೇಶದಲ್ಲಿ ಮೇಘಸ್ಪೋಟದ ಮಾದರಿಯಲ್ಲಿ 3:00 ರಿಂದ 5:00 ರವರೆಗೆ ಸುರಿದ ಭಾರಿ ಮಳೆಯಿಂದಾಗಿ, ಕಬ್ಬಿನಾಲೆ ಗುಡ್ಡದಿಂದ ನೀರು ಹರಿದು, ಜನಜೀವನಕ್ಕೆ ತೀವ್ರ ತೊಂದರೆ ಉಂಟುಮಾಡಿತು.

ಇಲ್ಲಿನ ಭಾರಿ ಮಳೆಯಿಂದಾಗಿ 2 ಕಾರು ಮತ್ತು 2 ಬೈಕುಗಳಿಗೆ ಹಾನಿಯಾಗಿದೆ. ಸಂಜೆ ಬಳಿಕ ಮಳೆ ಇಳಿಮುಖಗೊಂಡಿದ್ದು, ಸದ್ಯದ ವಾತಾವರಣ ಮೋಡ ಕವಿದ ಸ್ಥಿತಿಯಲ್ಲಿದೆ.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ