ಬಸ್ ಚಾಲಕನಿಗೆ ಹಠಾತ್ ಎದೆನೋವು; ಇಳಿಜಾರಿಗಿಳಿದ ಬಸ್….!

ಉಡುಪಿ : ಬಸ್ ಚಾಲಕನಿಗೆ ಡ್ರೈವಿಂಗ್ ವೇಳೆ ಹಠಾತ್ ಎದೆ ನೋವು ಕಾಣಿಸಿಕೊಂಡ ಪರಿಣಾಮ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗೆ ಇಳಿದು ನಿಂತ ಘಟನೆ ಸಂಭವಿಸಿದೆ.

ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ನ ಚಾಲಕ ಶಂಭು ಎಂಬವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಸೀದಾ ರಸ್ತೆ ಬದಿಯ ಇಳಿಜಾರಿಗೆ ಇಳಿದು ನಿಂತಿದೆ. ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ರಸ್ತೆ ಬದಿ ಹೋದ ಕಾರಣ ದೊಡ್ಡ ಅಪಘಾತವೊಂದು ತಪ್ಪಿದೆ.

Related posts

ಪೆರ್ಡೂರಿನಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ; ಮೀನ ಸಂಕ್ರಮಣದಂದು ನಡೆದ ಕೆರೆದೀಪ, ಗರುಡವಾಹನ, ಕಟ್ಟೆಪೂಜೆ ಸಂಭ್ರಮ

ಕೈವಾರ ತಾತಯ್ಯನ ತತ್ವಾದರ್ಶ ಬದುಕಿಗೆ ಮಾದರಿಯಾಗಲಿ : ಸಂಸದ ಕೋಟ

‘ವಿಶ್ವಕರ್ಮ ಯೋಜನೆ’ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಸಂಸದ ಕೋಟ