ಕುಂಜಾರುಗಿರಿ ಚಿರತೆ ಹಿಡಿಯಲು ಯಶಸ್ವಿ ಕಾರ್ಯಾಚರಣೆ : ಚಿರತೆ ಭಯದಿಂದ ನಿಟ್ಟುಸಿರಿಟ್ಟ ಗ್ರಾಮಸ್ಥರು

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುಂಜಾರುಗಿರಿ ಪರಿಸರದಲ್ಲಿ ರಾಶಿ ಹಾಕಿದ ಶಿಲೆ ಕಲ್ಲುಗಳಲ್ಲಿ ವಾಸವಾಗಿದ್ದ ಚಿರತೆಯನ್ನು ಕೊನೆಗೂ ಯಶಸ್ವಿಯಾಗಿ ಸರೆ ಹಿಡಿಯಲಾಗಿದೆ.

ಈ ಪರಿಸರದಲ್ಲಿ ಬಹಳ ದಿನಗಳಿಂದ ಗ್ರಾಮಸ್ಥರು ಭಯದಿಂದ ಓಡಾಟ ನಡೆಸುತ್ತಿದ್ದರು. ಚಿರತೆ ಭಯದಿಂದಾಗಿ ಈ ಪರಿಸರದ ಅಂಗನವಾಡಿಗಳಿಗೆ ರಜೆಯನ್ನೂ ನೀಡಲಾಗಿತ್ತು. ರಾತ್ರಿ ಆಗುವ ಮೊದಲೇ ಗ್ರಾಮಸ್ಥರು ತಮ್ಮ ಮನೆಯಿಂದ ಹೊರಬರಲು ಭಯಪಡುತ್ತಿದ್ದರು.

ಇದೀಗ ಅರಣ್ಯ ಇಲಾಖೆ ಇಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಸೆರೆಹಿಡಿಯುವುದರೊಂದಿಗೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ