ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ್ ಪದಗ್ರಹಣ

ಉಡುಪಿ : ರೋಟರಿ ಉಡುಪಿ ಪ್ರಾಯೋಜಿತ ಶ್ರೀಕೃಷ್ಣ ಬಾಲನಿಕೇತನ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ನಡೆಯಿತು.

ರೋಟರಿ ಉಡುಪಿ ಅಧ್ಯಕ್ಷ ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಗೀತಾ ಮತ್ತು ಕಾರ್ಯದರ್ಶಿ ಸುಜಾತ ಅವರಿಗೆ ಪದಪ್ರದಾನ ನೆರೆವೇರಿಸಿ ಶುಭ ಹಾರೈಸಿದರು.

ಗತ ವರ್ಷದ ಅಧ್ಯಕ್ಷ ಅಭಿಷೇಕ್ ಸ್ವಾಗತಿಸಿದರು. ಗತ ವರ್ಷದ ಕಾರ್ಯದರ್ಶಿ ಲಕ್ಷ್ಮಿ ಕಳೆದ ವರ್ಷದ ಕಾರ್ಯಕ್ರಮದ ವರದಿ ವಾಚಿಸಿದರು. ಇಂಟರಾಕ್ಟ್ ವಲಯ ಸಂಯೋಜಕ ರಿತೇಶ್ ಕೋಟ್ಯಾನ್, ಶ್ರೀಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಇಂಟರಾಕ್ಟ್ ಸಭಾಪತಿ ಸಾಧನಾ ಮುಂಡ್ಕೂರ್ ಶುಭ ಹಾರೈಸಿದರು.

ಜಯಲಕ್ಷ್ಮಿ ಆಚಾರ್ಯ ಅವರ ಸ್ನೇಹಿತರು ಕೊಡ ಮಾಡಿದ ಮಕ್ಕಳ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು. ಇಂಟರಾಕ್ಟ್ ಕಾರ್ಯದರ್ಶಿ ಸುಜಾತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಾಲನಿಕೇತನದ ಮಾತಾಜಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ