ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉದ್ವಾರ್ಚನೆಯ ಪ್ರಯುಕ್ತ ವಿಶೇಷ ಪೂಜೆ

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ಉದ್ವಾರ್ಚನೆಯ ಪ್ರಯುಕ್ತ ಪರ್ಯಾಯ ಮಠಾಧೀಶರು ವಿಶೇಷ ಪೂಜೆ ನಡೆಸಿದರು. ಪರ್ಯಾಯ ಶ್ರೀಪುತ್ತಿಗೆ ಮಠದ ಇಬ್ಬರು ಸ್ವಾಮೀಜಿಗಳು ಶ್ರೀಕೃಷ್ಣ ಮಠದ ಒಳಗೆ ಸಾಂಪ್ರದಾಯಿಕ ಆಚರಣೆಗಳಿಗೆ ಸಾಕ್ಷಿಯಾದರು. ಮಠದ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ಉದ್ವಾರ್ಚನೆಯ ಮೂಲಕ ಸ್ವಚ್ಛಗೊಳಿಸಲಾಗುತ್ತದೆ.

ಈ ವೇಳೆ ಶ್ರೀ ಕೃಷ್ಣದೇವರ ಮೂಲ ಪ್ರತಿಮೆಯನ್ನು ಬುಟ್ಟಿಯಿಂದ ಮುಚ್ಚಿಡುವ ಅಪರೂಪದ ಪದ್ಧತಿ ಇದೆ. ಆ ದಿನದಂದು ಸಾರ್ವಜನಿಕರಿಗೆ ಮಹಾಪೂಜೆಯವರೆಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶಗಳಿರುವುದಿಲ್ಲ. ಆ ಸಮಯದಲ್ಲಿ ಶ್ರೀ ಕೃಷ್ಣನ ವಿಗ್ರಹ ಸೇರಿದಂತೆ ಮಠದಲ್ಲಿನ ಗರ್ಭಗುಡಿ ಪ್ರತಿಯೊಂದು ಭಾಗದಲ್ಲಿ ಮತ್ತು ಪ್ರತೀ ಕಡೆಗಳಲ್ಲಿ ಶುಚಿಗೊಳಿಸಲಾಗುತ್ತದೆ. ಶ್ರೀ ಕೃಷ್ಣನ ಉದ್ವಾರ್ಚನೆಯ ನಂತರ ಪರ್ಯಾಯ ಶ್ರೀಗಳು ಕೃಷ್ಣನಿಗೆ ಮಹಾಪೂಜೆಯನ್ನು ನೆರೆವೇರಿಸಿದರು. ಆ ಬಳಿಕ ಸಾರ್ವಜನಿಕರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ