ಬೃಹತ್ ಗೀತೋತ್ಸವದ ವಿಶೇಷ ಆಕರ್ಷಣೆ : 18 ದಿನಗಳ ಹರಿಕಥಾ ಸರಣಿ ಇಂದಿನಿಂದ ಪ್ರಾರಂಭ

ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ 48 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಇದೀಗ ಇಂದಿನಿಂದ ಶ್ರೀಹಂಡೆದಾಸಪ್ರತಿಷ್ಠಾನದ ಸಹಯೋಗದೊಂದಿಗೆ ರುಕ್ಮಿಣಿ ಹಂಡೆ ಇವರ ಸಹಕಾರದೊಂದಿಗೆ 14 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮ ಇಂದಿನಿಂದ ಪ್ರಾರಂಭಗೊಂಡಿತು.

ಕಿರಿಯ ಶ್ರೀಪಾದರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಶ್ರೀಪಾದರು, ನಶಿಸುತ್ತಿರುವ ಈ ಅಪೂರ್ವ ಕಲೆಯನ್ನು ಉಳಿಸುವಲ್ಲಿ ಶ್ರೀಮತಿ ಹಂಡೆಯವರ ಪ್ರಯತ್ನ ಅನುಕರಣೀಯವಾಗಿದೆ.

ಭಗವದ್ಗೀತೆಯ ಮೇಲಿನ ಹರಿಕಥೆಯ ಪ್ರಥಮ ಪ್ರಯೋಗ ನಮ್ಮ ವಿಶ್ವಗೀತಾಪರ್ಯಾಯದಲ್ಲಿ ನಡೆಯುತ್ತಿರುವುದು ತುಂಬಾ ಶ್ಲಾಘನೀಯ. ಈ ಮೂಲಕವೂ ಗೀತೆಯ ಪ್ರಚಾರ ನಡೆಯುವಂತಾಗಲಿ ಎಂದು ಹರಸಿದರು.

ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು. ಸಗ್ರಿ ವೇದವ್ಯಾಸ ಐತಾಳರು ಧನ್ಯವಾದವಿತ್ತರು.
ಮಧೂರು ಬಾಲಸುಬ್ರಹ್ಮಣ್ಯಂ, ಪ್ರಸನ್ನಾಚಾರ್ಯ, ರಮೇಶ್ ಭಟ್, ಉಪ್ಪೂರು ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಇಂದಿಂದಿನಿಂದ ಡಿಸೆಂಬರ್ 12 ರವರೆಗೆ ಸಾಯಂ 4 ರಿಂದ 6ರವರೆಗೆ ಶ್ರೀ ಮಧ್ವಮಂಟಪದಲ್ಲಿ ನಡೆಯಲಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ