ಹಿರಿಯ ಸಹಕಾರಿ ಧುರೀಣ ಅಣ್ಣಾಜಿ ನಿಧನ

ಉಡುಪಿ: ಹಿರಿಯ ಸಹಕಾರಿ ಧುರೀಣ ,ಸೂರಾಲು ಮಡಿ ನಿವಾಸಿ ಠಸೆ ವೆಂಡರ್‌ ಅಣ್ಣಾಜಿ (89) ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಸಮೀಪ ವಾಸವಿದ್ದು, ತದನಂತರದಲ್ಲಿ ಇಂದ್ರಾಳಿಯಲ್ಲಿ ನೆಲೆಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸುಮಾರು 35 ವರ್ಷಗಳ ಕಾಲ ಠಸೆ ವೆಂಡರ್‌ ಆಗಿ ಸೇವೆ ಸಲ್ಲಿಸಿ, ನ್ಯಾಯವಾದಿಗಳಿಗೆ ಚಿರಪರಿಚಿತರಾಗಿದ್ದರು. ನಗರ ಟೌನ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ 30 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Related posts

ಪೆರ್ಡೂರಿನಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ; ಮೀನ ಸಂಕ್ರಮಣದಂದು ನಡೆದ ಕೆರೆದೀಪ, ಗರುಡವಾಹನ, ಕಟ್ಟೆಪೂಜೆ ಸಂಭ್ರಮ

ಕೈವಾರ ತಾತಯ್ಯನ ತತ್ವಾದರ್ಶ ಬದುಕಿಗೆ ಮಾದರಿಯಾಗಲಿ : ಸಂಸದ ಕೋಟ

‘ವಿಶ್ವಕರ್ಮ ಯೋಜನೆ’ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಸಂಸದ ಕೋಟ