ಕುಕ್ಕಿಕಟ್ಟೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇದ್ದ ಹಿರಿಯ ವ್ಯಕ್ತಿಯ ರಕ್ಷಣೆ : ಹೊಸಬದುಕು ಆಶ್ರಮಕ್ಕೆ ದಾಖಲು

ಉಡುಪಿ : ಹಲವಾರು ವರ್ಷಗಳಿಂದ ಉಡುಪಿ ಕುಕ್ಕಿಕಟ್ಟೆಯ ಬಸ್ ನಿಲ್ದಾಣದಲ್ಲಿ ನೆಲೆಕಂಡ ಮಾನಸಿಕ ಹಿರಿಯ ವ್ಯಕ್ತಿ ಸಾರ್ವಜನಿಕರಿಗೆ ಕಲ್ಲು ಎಸೆದು ಭಯಾನಕ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಮನವಿಯ ಮೆರೆಗೆ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ರಕ್ಷಣೆ ಮಾಡಿ ಹೊಸಬದುಕು ಆಶ್ರಮಕ್ಕೆ ದಾಖಲು ಮಾಡಲಾಯಿತು.

ಸಮಾಜ ಸೇವಕರು ಸೇವಾ ಕಾರ್ಯಾಚರಣೆ ಮಾಡುವಾಗ ಮಾನಸಿಕವಾಗಿ ನೊಂದ ಹಿರಿಯ ವ್ಯಕ್ತಿ ಸಮಾಜ ಸೇವಕರಿಗೆ ಹೊಡೆಯಲು ಮುಂದಾದರು ಯಾವುದಕ್ಕೂ ಹೆದರದೆ ಹಿರಿಯ ವ್ಯಕ್ತಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕುಕ್ಕಿಕಟ್ಟೆ ಬಸ್ ನಿಲ್ದಾಣ ಆಸುಪಾಸು ದುರ್ವಾಸನೆ ನಾರುತ್ತಿದ್ದು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ನಿಲ್ಲಲು ಆಗದ ಪರಿಸ್ಥಿತಿ ಎದುರಾದಾಗ, ಪೊಲೀಸ್ ನೇತೃತ್ವದಲ್ಲಿ ಹೊಸಬದುಕು ಆಶ್ರಮದ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ಥಾನ ಹಾಗೂ ರಾಜಶ್ರೀಯವರು ಸ್ಥಳಕ್ಕೆ ಧಾವಿಸಿ ಹಿರಿಯ ವ್ಯಕ್ತಿಯನ್ನು ನೋಡಿ ಅದೇ ಸ್ಥಳದಲ್ಲಿ ಸ್ವಚ್ಛ ಮಾಡಿ, ಸ್ನಾನ ಮಾಡಿ, ಕೂದಲು ಕಟ್ ಮಾಡಿ ಸಂಪೂರ್ಣ ಸ್ವಚ್ಛಗೊಳಿಸಿ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ