ಹರಿಪ್ರಸಾದ್ ಹೇಳಿಕೆಯಿಂದ ಇಡೀ ರಾಷ್ಟ್ರಕ್ಕೆ ನೋವಾಗಿದೆ, ಅವರು ಪೇಜಾವರರ ಕ್ಷಮೆ ಕೇಳಲಿ – ಸಂಸದ ಕೋಟ

ಉಡುಪಿ : ಪೇಜಾವರ ಶ್ರೀಗಳನ್ನು ಟೀಕಿಸಿದ ಬಿಕೆ ಹರಿಪ್ರಸಾದ್ ಅವರು ಶ್ರೀಗಳ ಕ್ಷಮೆ ಕೇಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಅವರು ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ. ಯಾವುದೇ ಜಾತಿ ವರ್ಗ ಅಲ್ಲ, ಇಡೀ ಹಿಂದೂ ಸಮುದಾಯಕ್ಕೆ ನೋವಾಗಿದೆ.
ಪೇಜಾವರ ವಿಶ್ವೇಶ ತೀರ್ಥರು ಪ್ರಥಮ ಬಾರಿಗೆ ಪರಿಶಿಷ್ಟರ ಕೇರಿಗಳಿಗೆ ಭೇಟಿ ಕೊಟ್ಟವರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಜನಾಂದೋಲನ ಮಾಡಿದವರು. ವಿಶ್ವ ಪ್ರಸನ್ನರಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಇದೆ. ರಾಮಮಂದಿರ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರ ಬಹಳ ಗೌರವದಿಂದ ನಡೆಸಿಕೊಂಡಿದೆ. ಅಂತಹ ಸರ್ವ ಶ್ರೇಷ್ಠ ಸಂತನ ಬಗ್ಗೆ ಲಘುವಾಗಿ ಮಾತನಾಡಿದ್ದೀರಿ. ಹರಿಪ್ರಸಾದ್ ಸ್ವಲ್ಪ ಗಡಿಬಿಡಿ ಮನುಷ್ಯ, ಗಡಿಬಿಡಿಯಲ್ಲಿ ಮಾತನಾಡಿದರೆ ತಕ್ಷಣ ಪೇಜಾವರ ಶ್ರೀಗಳ ಕ್ಷಮೆ ಕೇಳಿ. ಇಡೀ ರಾಷ್ಟ್ರ ಹರಿಪ್ರಸಾದ್ ಮಾತಿನಿಂದ ನೋವುಪಟ್ಟಿದೆ ಎಂದು ಹೇಳಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ