ನಾಪತ್ತೆಯಾಗಿದ್ದ ವ್ಯಕ್ತಿ‌ ಶವವಾಗಿ ಪತ್ತೆ

ಮಣಿಪಾಲ : ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆ ಪತ್ತೆಯಾಗಿರುವ ಘಟನೆಯು ನಡೆದಿದೆ.

ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ‌ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.‌ ಮಣಿಪಾಲ ಪೋಲಿಸ್ ಠಾಣೆಯ‌ ಎ‌ಎಸ್‌ಐ ವಿವೇಕಾನಂದ, ಎ‌ಎಸ್‌ಐ ವಿಜಯ, ಪ್ರಸನ್ನ ಉಪ್ಪೂರು, ಸಂಗೀತ ಮಣಿಪಾಲ ಘಟನಾ ಸ್ಥಳದಲ್ಲಿದ್ದು, ಮಹಜರು ಪ್ರಕ್ರಿಯೆ ನಡೆಸಿದರು.

ಶವ ಪತ್ತೆಯಾದ ಸ್ಥಳವು ಗಿಡಗಂಟಿ ಬೆಳೆದು ಪೊದೆಗಳಾಗಿರುವ ಕಾಡು ಪ್ರದೇಶವಾಗಿತ್ತು. ಕತ್ತಲಲ್ಲಿ ಶವವನ್ನು ಆಂಬುಲೆನ್ಸ್ ವಾಹನ ನಿಲುಗಡೆ ಇರುವ ಸ್ಥಳದೆಡೆಗೆ‌ ಶವ ಹೊತ್ತು ತರಲು ಪೋಲಿಸರು, ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಕತ್ತಲಲ್ಲಿ ಪ್ರಯಾಸ ಪಡಬೇಕಾಯಿತು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡುರವರು ನೆರವಾದರು.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ