ನಾಪತ್ತೆಯಾಗಿದ್ದ ವ್ಯಕ್ತಿ‌ ಶವವಾಗಿ ಪತ್ತೆ

ಮಣಿಪಾಲ : ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆ ಪತ್ತೆಯಾಗಿರುವ ಘಟನೆಯು ನಡೆದಿದೆ.

ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ‌ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.‌ ಮಣಿಪಾಲ ಪೋಲಿಸ್ ಠಾಣೆಯ‌ ಎ‌ಎಸ್‌ಐ ವಿವೇಕಾನಂದ, ಎ‌ಎಸ್‌ಐ ವಿಜಯ, ಪ್ರಸನ್ನ ಉಪ್ಪೂರು, ಸಂಗೀತ ಮಣಿಪಾಲ ಘಟನಾ ಸ್ಥಳದಲ್ಲಿದ್ದು, ಮಹಜರು ಪ್ರಕ್ರಿಯೆ ನಡೆಸಿದರು.

ಶವ ಪತ್ತೆಯಾದ ಸ್ಥಳವು ಗಿಡಗಂಟಿ ಬೆಳೆದು ಪೊದೆಗಳಾಗಿರುವ ಕಾಡು ಪ್ರದೇಶವಾಗಿತ್ತು. ಕತ್ತಲಲ್ಲಿ ಶವವನ್ನು ಆಂಬುಲೆನ್ಸ್ ವಾಹನ ನಿಲುಗಡೆ ಇರುವ ಸ್ಥಳದೆಡೆಗೆ‌ ಶವ ಹೊತ್ತು ತರಲು ಪೋಲಿಸರು, ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಕತ್ತಲಲ್ಲಿ ಪ್ರಯಾಸ ಪಡಬೇಕಾಯಿತು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡುರವರು ನೆರವಾದರು.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ