ನಾವೀನ್ಯತೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸಲು ಡ್ಯೂರ್ ಟೆಕ್ನಾಲಜೀಸ್‌ನೊಂದಿಗೆ ಮಾಹೆ ಪಾಲುದಾರಿಕೆ

ಮಣಿಪಾಲ : ಮುಂದುವರಿದ ಸಂಶೋಧನೆ, ಶಿಕ್ಷಣ, ಆರೋಗ್ಯ ಆವಿಷ್ಕಾರ ಮತ್ತು ಪರಿವರ್ತನಾತ್ಮಕ ಪರಿಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ ಜೊತೆ ಕಾರ್ಯತಂತ್ರದ ಪಾಲುದಾರಿಕೆಯೊಂದಕ್ಕೆ ಬಂದಿದ್ದು, ಸಹಿ ಹಾಕಿದೆ.

ಈ ಕುರಿತ ಕಾರ್‍ಯಕ್ರಮದಲ್ಲಿ ಮಾಹೆಯ ಕಾರ್ಪೊರೆಟ್ ರಿಲೇಶನ್ ಕುರಿತ ನಿರ್ದೇಶಕ ಡಾ.ಹರೀಶ್ ಕುಮಾರ್, ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು ಮತ್ತು ಈ ಒಪ್ಪಂದದ ಕುರಿತ ಅವಲೋಕನ ಒದಗಿಸಿದರು. ಜೊತೆಗೆ ಎರಡೂ ಸಂಸ್ಥೆಗಳ ಗುರಿಗಳನ್ನು ಹೇಳಿ ಬೆಳವಣಿಗೆ ಮತ್ತು ಪ್ರಭಾವಶಾಲಿ ಸಂಶೋಧನೆಗೆ ದೀರ್ಘಾವಧಿಯ ಸಾಮರ್ಥ್ಯವಿರಬೇಕೆಂದು ಅಭಿಪ್ರಾಯ ಪಟ್ಟರು.

ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಅವರು ಮಾತನಾಡಿ, ಶೈಕ್ಷಣಿಕ ಮತ್ತು ಆರೋಗ್ಯ ರಕ್ಷಣೆಯ ಆವಿಷ್ಕಾರವನ್ನು ಮುನ್ನಡೆಸುವಲ್ಲಿ ಅಂತಹ ಒಪ್ಪಂದಗಳು ಅಗತ್ಯ ಎಂದರು. ಈ ರೀತಿಯ ಸಹಯೋಗಗಳು ಸಂಶೋಧನೆ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ಚಾಲನೆಗೊಳಿಸುತ್ತವೆ. ಈ ಪಾಲುದಾರಿಕೆಯು ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ತರುವ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.

ಮಾಹೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ, ಡಾ. ರವಿರಾಜ ಎನ್. ಸೀತಾರಾಮ್ ಅವರು ಶ್ರೇಷ್ಠತೆಯ ದೃಷ್ಟಿಕೋನವನ್ನು ಹಂಚಿಕೊಂಡರು. ಇದು ಎರಡು ಘಟಕಗಳ ಒಟ್ಟುಗೂಡಿಸುವಿಕೆಯನ್ನು ಪ್ರತಿನಿಧಿಸುತ್ತದೆ. ಈ ಸಹಯೋಗವು ವಿದ್ಯಾರ್ಥಿಗಳಿಂದ ಹಿಡಿದು ಅಧ್ಯಾಪಕರವರೆಗೆ ವಿಶಾಲ ಸಮುದಾಯದ ಎಲ್ಲರಿಗೂ ಪ್ರಯೋಜನವನ್ನು ನೀಡಲಿದೆ ಎಂದು ಆಶಿಸಿದರು.

ಡ್ಯೂರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ವಿಪಿನ್ ಯಾದವ್, ಅವರು ಮಾತನಾಡಿ, ಆರೋಗ್ಯ ಕ್ಷೇತ್ರದ ಪರಿವರ್ತನೆಯಲ್ಲಿ ಪರಿವರ್ತಿಸುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು. ಇಂದು ಆರೋಗ್ಯ ರಕ್ಷಣೆಯಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು ನಾವೀನ್ಯತೆ ಮುಖ್ಯ ಎಂಬುದನ್ನು ನಾವು ಡ್ಯೂರ್ ಟೆಕ್ನಾಲಜೀಸ್‌ನಲ್ಲಿ ನಂಬಿದ್ದೇವೆ. ಮಾಹೆಯೊಂದಿಗೆ ನಮ್ಮ ಪಾಲುದಾರಿಕೆ ಭವಿಷ್ಯದಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಅತ್ಯುತ್ತಮವಾದ ಶೈಕ್ಷಣಿಕ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯನ್ನು ಒಟ್ಟುಗೂಡಿಸಲು ಸಾಧ್ಯವಾಗಲಿದೆ ಎಂದರು.

ಮಾಹೆ ರಿಜಿಸ್ಟ್ರಾರ್ ಡಾ ಗಿರಿಧರ್ ಪಿ. ಕಿಣಿ, ಅವರು ಮಾತನಾಡಿ, ಮಣಿಪಾಲವು ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಡ್ಯೂರ್ ಟೆಕ್ನಾಲಜೀಸ್ ಜೊತೆಗಿನ ಸಹಯೋಗವು ಮಾಹೆ ಇರಿಸಿಕೊಂಡಿರುವ ಆರೋಗ್ಯ ಆವಿಷ್ಕಾರ ಕುರಿತ ಭವಿಷ್ಯ ದೃಷ್ಟಿಕೋನಕ್ಕಾಗಿ ಒಂದು ಉತ್ತೇಜಕ ಕ್ಷಣವಾಗಿದೆ ಎಂದರು.

ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕರಾದ ಡಾ. ಚೆರಿಯನ್ ವರ್ಗೀಸ್ ವಿ, ಅವರು ಮಾತನಾಡಿ, ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ. ಜೊತೆಗೆ ಒಪ್ಪಂದವು ಶೈಕ್ಷಣಿಕ ಉತ್ಕೃಷ್ಟತೆಗಾಗಿ ಮಾಹೆಗೆ ಪ್ರಮುಖವಾದ್ದಾಗಿದೆ. ಈ ಸಹಯೋಗವು ಮತ್ತಷ್ಟು ನಾವೀನ್ಯತೆಯತ್ತ ಒಂದು ಪ್ರೇರಣದಾಯಕ ಹೆಜ್ಜೆಯಾಗಿದೆ. ಜಂಟಿ ಸಂಶೋಧನಾ ಪ್ರಯತ್ನಗಳನ್ನು ಉತ್ತೇಜಿಸಲು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಏರಿಸಲು ಮತ್ತು ಅತ್ಯಾಧುನಿಕ ತರಬೇತಿ ಉಪಕ್ರಮಗಳನ್ನು ಪರಿಚಯಿಸಲು ಈ ಒಪ್ಪಂದವನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಡಾ. ಗಣೇಶ್ ಪ್ರಸಾದ್ ಪಡುಬಿದ್ರಿ (ನಿರ್ದೇಶಕರು – ಐಟಿ ಮತ್ತು ಡಿಜಿಟಲ್ ರೂಪಾಂತರ, ಮಾಹೆ, ಮಣಿಪಾಲ), ಭರತ್ ಕುಮಾರ್ (ನಿರ್ದೇಶಕರು – ಪಿಆರ್, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಮಾಹೆ, ಮಣಿಪಾಲ), ಡಾ. ಬ್ರ್ಯಾಲ್ ಕ್ಯಾರಿ ಡಿಸೋಜಾ (ಸಹ ಪ್ರಾಧ್ಯಾಪಕರು, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಣಿಪಾಲ), ಮತ್ತು ಶ್ರೀ. ಭುವನೇಶ್ವರನ್ ಟೆಕ್ನೋರ್ ಮಾನಿಪಾಲ್ ಪ್ರೈ. ಲಿ.) ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ