ಆಹಾರ ಅಸುರಕ್ಷತೆ : ಬೆಂಗಳೂರಿನ ಕೆಎಫ್‌ಸಿ ಮಳಿಗೆ ಸೇರಿದಂತೆ ನಾಲ್ಕು ಸಂಸ್ಥೆಯ ಲೈಸೆನ್ಸ್ ಅಮಾನತು : ಸಚಿವ ದಿನೇಶ್ ಗುಂಡೂರಾವ್

ಮಂಗಳೂರು : ಆಹಾರ ಅಸುರಕ್ಷತೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಬೆಂಗಳೂರಿನ ಕೆಎಫ್‌ಸಿಯ ಒಂದು ಮಳಿಗೆ ಸೇರಿದಂತೆ ನಾಲ್ಕು ಸಂಸ್ಥೆಗಳ ಲೈಸೆನ್ಸ್ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, “ಆಹಾರ ಸುರಕ್ಷಿತವಾಗಿ ಜನರಿಗೆ ಸಿಗಬೇಕು. ಆಹಾರದ ತಯಾರಿಕೆ ಹೇಗಾಗುತ್ತದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು. ಅದಕ್ಕಾಗಿ ರೆಸ್ಟೋರೆಂಟ್ ಮತ್ತು ಆಹಾರ ತಯಾರಿಕಾ ಕೇಂದ್ರಗಳಲ್ಲಿ ತಪಾಸಣೆ ನಡೆಸಬೇಕು. ಪ್ರತಿ ತಿಂಗಳು ವಿಶೇಷ ಡ್ರೈವ್ ಮಾಡಬೇಕೆಂದು ಸೂಚಿಸಲಾಗಿದೆ ” ಎಂದು ತಿಳಿಸಿದರು.

ಅಸುರಕ್ಷಿತ ಆಹಾರದ ವಿರುದ್ಧ ಕ್ರಮ :
ಮಾಂಸದಂಗಡಿ ಮತ್ತು ಆಹಾರದ ಉದ್ದಿಮೆಗಳನ್ನು ತಪಾಸಣೆ ನಡೆಸಬೇಕು. ಪ್ರತಿ ತಿಂಗಳು ಈ ಬಗ್ಗೆ ರಿಪೋರ್ಟ್ ಮಾಡಿ ಮಾಧ್ಯಮಕ್ಕೆ ಬಿಡುಗಡೆ ಮಾಡಬೇಕು. “ಯಾವ ರೀತಿ ಕಲಬೆರಕೆ ಮಾಡುತ್ತಾರೆ, ಅಸುರಕ್ಷಿತ ಆಹಾರ ಕೊಡ್ತಾ ಇದ್ದಾರೆ ಎಂದು ಜನರಿಗೆ ತಿಳಿಯಬೇಕು,” ಎಂದರು.

ಆಗಸ್ಟ್ ತಿಂಗಳ ತಪಾಸಣೆ :
ಆಗಸ್ಟ್ ತಿಂಗಳಲ್ಲಿ ಕೇಕ್ ಮತ್ತು ಖೋವಾ ಬಗ್ಗೆ ತಪಾಸಣೆ ನಡೆಸಲಾಗಿತ್ತು. ಮುಂದಿನ ತಿಂಗಳು ಬೇರೆ ತಪಾಸಣೆ ನಡೆಯಲಿದೆ. “ಈ ಮೊದಲು ಕಬಾಬ್ ಮತ್ತು ಗೋಬಿ ಮಂಚೂರಿಗೆ ಬಣ್ಣ ಹಾಕಿರುವುದು ತಿಳಿದುಬಂದಿತ್ತು,” ಎಂದರು.

ಮಾಹಿತಿ ಮತ್ತು ಜಾಗೃತಿ :
ತಯಾರಕರು ತಮ್ಮ ತಪ್ಪುಗಳನ್ನು ಅರಿಯದಿರುವ ಕಾರಣ, ಮಾರಾಟ ಬೇಗ ಆಗಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. “ಈ ಬಗ್ಗೆ ಅವರಿಗೂ ಮಾಹಿತಿ ಕೊಡುತ್ತೇವೆ,” ಎಂದು ಸಚಿವರು ಹೇಳಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು