ಕುಲಾಲ ಸಂಘ(ರಿ) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ

ಹೆಬ್ರಿ : ಕುಲಾಲ ಸಂಘ(ರಿ) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ನವೆಂಬರ್ 17 ಭಾನುವಾರದಂದು ಹೆಬ್ರಿ ಚೈತನ್ಯ ಸಭಾ‌ಭವನದಲ್ಲಿ ಜರುಗಿತು.

ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಕೆ ಎ ಲಕ್ಷ್ಮಣ್ ಕುಲಾಲ್ ವಿಜಯ ವಿಠ್ಠಲ್ ಕೆಮಿಕಲ್ಸ್ ಎಂ ಡಿ ಇವರು ಯುವಕ ಯುವತಿಯರು ಸ್ವಂತ ಉದ್ಯೋಗದಿಂದ ಸ್ವಾವಲಂಬಿಯಾಗಿ ಸಮಾಜದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ನಂತರ ಕುಂಬಾರಿಕೆ ಕುಲಕಸುಬು ಮಾಡುವವರಿಗೆ ಹಾಗೂ ವಿಭಿನ್ನ ಶೈಲಿಯ ಕೃಷಿಕರಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ಸಂಘದ ಮಹಾಪೋಷಕರು ಮತ್ತು ಪೋಷಕರಿಗೆ ಗೌರವದಿಂದ ಸನ್ಮಾನಿಸಲಾಯಿತು.

ರಾಜೀವ ಕುಲಾಲ್ ಪಿ ಡಬ್ಲ್ಯೂ ಡಿ ಗುತ್ತಿಗೆದಾರರು ಮಾತನಾಡಿ ಸಂಘದಲ್ಲಿ ಒಗ್ಗೂಡಿ ಮುಂದೆ ಹೋಗಬೇಕೆಂದು ಸಲಹೆ ಇತ್ತರು.
ನಂತರ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಭೋಜ ಕುಲಾಲ್ ಬೆಳಂಜೆ ಗೌರವಾದ್ಯಕ್ಷರು ಮಾತಾಡಿ ಸಂಘಕ್ಕೆ ಸ್ವಂತ ನಿವೇಶನದ ಅಗತ್ಯ ಇದೆ ಎಂದರು. ಕಾಳು ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ಪೆರ್ಡೂರು ಮಾತನಾಡಿ ಪ್ರಥಮ ವರ್ಷದಲ್ಲಿ ಕುಲಾಲ ಸಂಘ ಹೆಬ್ರಿ ತಾಲೂಕು ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತಿದು ಇದರ ಸಂಘಟನಾ ಶಕ್ತಿ ಅಭಿನಂದನೀಯ ಎಂದರು.
ಪ್ರಭಾಕರ್ ಕುಲಾಲ್ ವಲಯ ಅರಣ್ಯಾಧಿಕಾರಿಗಳು ಕಾರ್ಕಳ ಮಾತನಾಡಿ ತುಳು ಮತ್ತು ಕನ್ನಡದಲ್ಲಿ ಮಾತಾಡುವವರನ್ನು ಒಗ್ಗೂಡಿಸಿಕೊಂಡು ಸಂಘಟನೆ ಮಾಡುತ್ತಿರುವುದು ಹೆಬ್ರಿ ಕುಲಾಲ ಸಂಘದಲ್ಲಿ ಮಾತ್ರ ಎಂದು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಮಾತನಾಡಿ ನಾವು ತಾಲೂಕಿನಾದ್ಯಂತ ಸಂಘಟನೆಯನ್ನು ವಿಸ್ತರಿಸಬೇಕು. ನಮ್ಮ ಕುಲಾಲ ಸಮಾಜದ ಎಲ್ಲ ಜನರು ತಾಲೂಕು ಸಂಘದ ಒಟ್ಟಿಗೆ ಬರುವ ಹಾಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.

ಸಭೆಯಲ್ಲಿ ಕೆ ನಾರಾಯಣ್ ಕುಲಾಲ್ ಶ್ರೀರಾಮ್ ಜುವೆಲ್ಲರ್ಸ್, ವಿಠಲ್ ಕುಲಾಲ್ ಪಿ ಡಬ್ಲ್ಯೂ ಡಿ ಗುತ್ತಿಗೆದಾರರು, ಸುಮಿತ್ರಾ ಕುಲಾಲ್ ಬೆಪ್ದೆ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪ್ರದಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್ ದರ್ಬುಜೆ ಉಪಸ್ಥಿತರಿದ್ದರು.

ಸಭೆಯನ್ನು ಅಣ್ಣಪ್ಪ ಕುಲಾಲ್ ಚಾರ ಸ್ವಾಗತಿಸಿದರು, ವಂದನಾ ಕುಲಾಲ್ ಚಾರ ನಿರೂಪಿಸಿದರು ಮತ್ತು ಸುನಂದ ಕುಲಾಲ್ ಮುಳ್ಳುಗುಡ್ಡೆ ಧನ್ಯವಾದ ಸಮರ್ಪಿಸಿದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ