ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ – ಹುಲಿಗಳ ಜೊತೆ ಹೆಜ್ಜೆ ಹಾಕಿದ ಡಾನ್ಸರ್ ಶ್ರೇಯಾ ಆಚಾರ್ಯ

ಭಗವಾನ್ ಶ್ರೀ ಕೃಷ್ಣನ ಜನ್ಮವಾಗಿದೆ, ಇಂದು ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ನಡೆಯುತ್ತಿದೆ. ಎಲ್ಲಿ ನೋಡಿದರೂ ಹುಲಿಗಳ ಕಲರವ. ಮಹಿಳಾ ಹುಲಿವೇಷಗಳು ಪುರುಷರ ಹುಲಿ ವೇಷಗಳಿಗೆ ಫೈಟ್ ಕೊಡುತ್ತಿವೆ. ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋದ ಡಾನ್ಸರ್ ಶ್ರೇಯಾ ಆಚಾರ್ಯ ಮುಂಬೈನಿಂದ ಬಂದು ಹುಲಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷ ತಂಡ ಕೊಂಬೆ ಕುಣಿತ ತಂಡಗಳ ಜೊತೆ ನಗರದ ಅಲ್ಲಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಲೆ, ಸಂಸ್ಕೃತಿ ಸಂಪ್ರದಾಯ ಉಳಿಸೋಣ ಎಂದು ಸಂದೇಶ ಕೊಟ್ಟಿದ್ದಾರೆ.

ಇಡೀ ಕುಟುಂಬ ಅಷ್ಟಮಿಯನ್ನು ಆಚರಣೆ ಮಾಡಲಿಕ್ಕೆ ಬೆಂಗಳೂರು ಮುಂಬೈಯ ಬೇರೆ ಬೇರೆ ಭಾಗಗಳಿಂದ ನಾವು ಉಡುಪಿಗೆ ಬರುತ್ತೇವೆ. ಕುಟುಂಬ ಜೊತೆಯಾಗುವ ಜೊತೆಗೆ, ನಮ್ಮ ಕಲೆ ಸಂಸ್ಕೃತಿಯ ಜೊತಗಿರುವ ಉದ್ದೇಶವು ಇದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚರಣೆಗಳು ತಿಳಿಯಬೇಕು ಅಂತ ಹೇಳಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ