ಅನುಮತಿ ಇಲ್ಲದೆ ಜಾಥಾ – ಎಸ್‌ಡಿಪಿಐ ನಾಯಕರ ವಿರುದ್ಧ ಮತ್ತೆ ಕೇಸ್!

ಪಡುಬಿದ್ರಿ : ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಎಸ್‌ಡಿಪಿಐ ನಾಯಕ ರಿಯಾಜ್‌ ಕಡುಂಬು ಹಾಗೂ ಮತ್ತಿತರರು ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಅವರ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್‌ ಜಾಥಾ – 2″ ಎಂಬ ಜಾಥಾವನ್ನು ಎಸ್‌ಡಿಪಿಐ ಡಿಸೆಂಬರ್ 10ಕ್ಕೆ ಆಯೋಜಿಸಿತ್ತು.

ಈ ಕುರಿತಾದ ಅನುಮತಿಯನ್ನು ಪಡೆಯಲಾಗಿದೆಯೇ ಎಂದು ಹೆಜಮಾಡಿಗೆ ಆಗಮಿಸಿದ್ದ ಜಾಥಾದ ನಾಯಕ ರಿಯಾಜ್‌ ಕಡುಂಬು ಅವರಲ್ಲಿ ಠಾಣೆಯ ಪಿಎಸ್‌ಐ ಪ್ರಸನ್ನ ಪ್ರಶ್ನಿಸಿದ್ದರು. ಆಗ ಅನುಮತಿ ಪಡೆದಿಲ್ಲ ಎನ್ನುವುದನ್ನು ಎಸ್‌ಡಿಪಿಐ ನಾಯಕರು ಪೊಲೀಸರಿಗೆ ತಿಳಿಸಿದ್ದರು.
ಅನುಮತಿ ಇಲ್ಲದ ಜಾಥಾದಲ್ಲಿ ಕಾರು ಬೈಕ್‌ಗಳಲ್ಲಿನ 75 ರಿಂದ 100 ಜನರ ಅಕ್ರಮ ಗುಂಪು ಹೆದ್ದಾರಿ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ. ಇದು ಸರಿಯಲ್ಲ ಎಂದು ಪ್ರಸನ್ನ ಅವರು ವಿವರಿಸಿದ್ದರು.

ಆದರೂ ಅದಕ್ಕೆ ಕಿವಿಗೊಡದೆ ಘೋಷಣೆ ಕೂಗುತ್ತಾ ಮೂಲ್ಕಿಯತ್ತ ಜಾಥಾವನ್ನು ಮುಂದುವರಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!