ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟನೆ

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಡೆಯಿತು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಂಐಟಿ ನಿವೃತ್ತ ಪ್ರಾಧ್ಯಾಪಕ ನಾರಾಯಣ ಶೆಣೈ, ವೈದ್ಯ ಡಾ| ವಿಜಯೇಂದ್ರ ಅವರು ಕೈಮಗ್ಗ ಮತ್ತು ಗುಡಿಕೈಗಾರಿಕೆಯ ಮಹತ್ವದ ಬಗ್ಗೆ ಪದ್ಮಶಾಲಿ ಸಮುದಾಯದ ಕೊಡುಗೆ ಬಗ್ಗೆ ಮಾತನಾಡಿದರು.

ಮಾಜಿ ಶಾಸಕ ಕೆ. ರಘುಪತಿ ಭಟ್‌, ನಗರಸಭೆ ಸದಸ್ಯರಾದ ಪ್ರಭಾಕರ್‌ ಪೂಜಾರಿ, ಕೃಷ್ಣರಾವ್‌ ಕೊಡಂಚ, ರಜನಿ ಹೆಬ್ಟಾರ್‌, ವಿಜಯ ಕೊಡವೂರು, ಆಯೋಜನ ಸಮಿತಿ ಅಧ್ಯಕ್ಷ ಚಂದನ್‌ ಶೆಟ್ಟಿಗಾರ್‌, ಪದ್ಮಶಾಲಿ ಸಮಾಜದ ದೇವಸ್ಥಾನಗಳ ಪ್ರಮುಖರಾದ ಜ್ಯೋತಿ ಪ್ರಸಾದ್‌ ಶೆಟ್ಟಿಗಾರ್‌ ಕಿನ್ನಿಮೂಲ್ಕಿ, ಸುರೇಶ್‌ ಶೆಟ್ಟಿಗಾರ್‌ ಸಾಲಿಕೇರಿ, ಗಣೇಶ್‌ ಶೆಟ್ಟಿಗಾರ್‌ ಗೋಳಂಗಡಿ, ಓಂಪ್ರಕಾಶ್‌ ಶೆಟ್ಟಿಗಾರ್‌, ಪ್ರಭಾಶಂಕರ್‌ ಪದ್ಮಶಾಲಿ, ಜಯಕರ್‌ ಶೆಟ್ಟಿಗಾರ್‌, ವಿವೇಕ್‌ ಪಿ. ಎಸ್‌. , ಸುಂದರ್‌ ಶೆಟ್ಟಿಗಾರ್‌, ಹರೀಶ್ಚಂದ್ರ ಶೆಟ್ಟಿಗಾರ್‌, ಮನೋಹರ್‌ ಶೆಟ್ಟಿಗಾರ್‌, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಯಶವಂತ್‌, ಪ್ರಮುಖರಾದ ನರೇಂದ್ರ ಶೆಟ್ಟಿಗಾರ್‌ ಹೆರ್ಗ, ಶ್ರೀನಿವಾಸ್‌ ಶೆಟ್ಟಿಗಾರ್‌, ಅನುರಾಧಾ ಶೆಟ್ಟಿಗಾರ್‌, ಶೋಭಾ ಜ್ಯೋತಿ ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ