ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳೆ; ನೀರಿನಲ್ಲಿ ತೇಲಿಹೋದ ಕಾರು

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿಯ ಸಮೀಪ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವಾರು ಸಮಸ್ಯೆಗಳು ಉಂಟಾಗಿವೆ. ಆಗುಂಬೆ ಘಾಟ್‌ ಸಮೀಪದಲ್ಲಿ ತೀವ್ರ ಮಳೆ ಬೀರುವ ಮೂಲಕ, ಹೆಬ್ರಿಯ ಸಮೀಪದ ನದಿ ತೊರೆಗಳು ತುಂಬಿ ಹರಿಯುತ್ತಿವೆ.

ಮಳೆ ನೀರು ತೋಟ ಮತ್ತು ಗದ್ದೆಗಳಿಗೆ ಏಕಾಯೇಕಿ ನುಗ್ಗಿದ್ದು, ಈ ಹಿನ್ನೆಲೆಯಲ್ಲಿ, ತೋಟದಲ್ಲಿ ನಿಲ್ಲಿಸಿದ್ದ ಕಾರು ನೀರಿನಲ್ಲಿ ತೇಲಿಹೋದ ಘಟನೆ ಸಂಭವಿಸಿದೆ. ಮುದ್ರಾಡಿಯ ತಗ್ಗು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು, ರಬ್ಬರ್ ಅಡಿಕೆ ತೋಟದ ಮಧ್ಯೆ ಸಿಲುಕಿಕೊಂಡಿವೆ.

ಕಬ್ಬಿನಾಲೆ ಬೆಟ್ಟದ ಪರಿಸರದಲ್ಲಿ ವಿಪರೀತ ಮಳೆ ಸುರಿದ ಘಟನೆ, ಮಧ್ಯಾಹ್ನ 2:30 ರಿಂದ 4 ಗಂಟೆಯವರೆಗೆ ಸಂಭವಿಸಿದೆ. ಈ ಮಳೆಯ ಕಾರಣದಿಂದಾಗಿ, ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಕೆಲವೆಡೆ ಜಲಾಮಯಗೊಂಡವು.

ಕಾಂತಾರಬೈಲು 4, ಹೊಸಕಂಬಳ 1, ಮತ್ತು ಕೆಳಕಿಲದಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು, ಗುಡುಗು ಮತ್ತು ಮಿಂಚು ಸಹಿತ ಮಳೆಗೆ, ಎರಡು ಕಾರುಗಳು ಮತ್ತು ಬೈಕುಗಳಿಗೆ ಹಾನಿಯಾಗಿದೆ.

ಸಂಜೆ ನಂತರ ಮಳೆ ಇಳಿಮುಖವಾಗಿದ್ದು, ನದಿ ತೊರೆಯಲ್ಲಿ ಹೆಚ್ಚಿದ್ದ ನೀರಿನ ಮಟ್ಟವು ಇಳಿಮುಖವಾಗುತ್ತಿದೆ. ನೀರಿನ ಪ್ರಮಾಣ ಇನ್ನೂ ಕಡಿಮೆ ಆಗುವ ನಿರೀಕ್ಷೆಯಿದೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!