ಮರವಂತೆ ಕಡಲಲ್ಲಿ ಮೋಜು ಮಸ್ತಿ; ಅಪಾಯ ಆಹ್ವಾನಿಸುತ್ತಿರುವ ಪ್ರವಾಸಿಗರು!

ಮರವಂತೆ : ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಸತತ ಮಳೆಗೆ ಮರವಂತೆ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ ಕೊರೆತವೂ ಕಾಣಿಸಿಕೊಂಡಿದೆ. ಮರವಂತೆ ಬೀಚ್ ವಿಶ್ವಪ್ರಸಿದ್ಧಿಯನ್ನು ಹೊಂದಿದ್ದು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಜನರು ಇದರ ಸೌಂದರ್ವವನ್ನು ಆಸ್ವಾದಿಸದೇ ಮುಂದಕ್ಕೆ ಸಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಮರವಂತೆ ಬೀಚ್‌ನ ಎದುರಲ್ಲೇ ನದಿ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಮುದ್ರ ಮತ್ತು ನದಿ ಬೇರ್ಪಡಿಸುತ್ತದೆ. ಇದರಿಂದಾಗಿ ಈ ಬೀಚ್ ಪ್ರಸಿದ್ಧಿ ಪಡೆದಿದೆ.

ಆದರೆ ಪ್ರವಾಸಿಗರು ಮೋಜು ಮಸ್ತಿ ನೆಪದಲ್ಲಿ ಇಲ್ಲಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಬೀಚ್‌ನ ಕಲ್ಲು ಬಂಡೆಗಳ ಮೇಲೆ ಹತ್ತಿ ಸೆಲ್ಫೀ ಕ್ಲಿಕ್ಕಿಸುವುದು, ಸಮುದ್ರಕ್ಜೆ ಇಳಿದು ಅಲೆಗಳ ಜೊತೆ ಆಟ ಆಡುವುದನ್ನು ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸುವ ಅಗತ್ಯ ಇದೆ. ಹಲವು ಭಾಗಗಳಲ್ಲಿ ಜನರು ಮೋಜು ಮಸ್ತಿ ನೆಪದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇಲ್ಲೂ ಅದು ಪುನರಾವರ್ತನೆ ಆಗದಂತೆ ತಡೆಯಬೇಕಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ