ಟ್ಯಾಕ್ಸಿಗಳಿಗೆ ಸಬ್ಸಿಡಿ ತೈಲ ವಿತರಿಸಿ : ಶ್ರೀರಾಮ ಸೇನೆ ಆಗ್ರಹ

ಉಡುಪಿ : ಪ್ರತೀ ಬಾರಿ ತೆರಿಗೆ ವಿಷಯ ಬಂದಾಗ ಮೊದಲಿಗೆ ಟ್ಯಾಕ್ಸಿಗಳ ಮೇಲೆ ಹೊರೆ ಹಾಕಲಾಗುತ್ತದೆ. ಆದರೂ ಸರಕಾರಗಳು ಟ್ಯಾಕ್ಸಿಯವರಿಗೆ ಏನು ನೀಡಿದೆ ಎಂದು ಪ್ರಶ್ನಿಸಿರುವ ಶ್ರೀರಾಮ ಸೇನೆ, ಟ್ಯಾಕ್ಸಿಗಳಿಗೆ ಸಬ್ಸಿಡಿ ತೈಲ ವಿತರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಈಗಾಗಲೇ ರಾಜ್ಯ ಸರಕಾರದ ಕೆಲವು ತೆರಿಗೆ ನಿಯಮದಿಂದ ಟ್ಯಾಕ್ಸಿ ಮಾಲಕರು ಸಂಕಷ್ಟ ಅನುಭವಿಸುವಂತಾಗಿದೆ.

ಪ್ರತೀ ಬಾರಿಯೂ ಚುನಾವಣೆ ಇನ್ನಿತರ ಸರಕಾರದ ಕೆಲಸಕ್ಕೆ ಟ್ಯಾಕ್ಸಿಗಳು ಬೇಕು. ಆದರೆ, ನಂತರ ಟ್ಯಾಕ್ಸಿಗಳನ್ನು ಕಡೆಗಣಿಸುವುದು ರಾಜ್ಯ ಸರಕಾರಕ್ಕೆ ಅದರಲ್ಲೂ ಈಗಿನ ಮುಖ್ಯಮಂತ್ರಿಯ ಜಾಯಮಾನವಾಗಿದೆ.

ಕರ್ನಾಟಕದಲ್ಲಿ ತೆರಿಗೆ ಏರಿಸಿ, ಹೊರ ರಾಜ್ಯದ ಪ್ರವಾಸಿಗಳು ಈ ರಾಜ್ಯಕ್ಕೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಿಂದ ಹೈರಾಣಾಗಿರುವ ಟ್ಯಾಕ್ಸಿಗಳಿಗೆ ಮತ್ತೆ ಡೀಸೆಲ್, ಪೆಟ್ರೋಲ್ ದರಏರಿಸುವ ಮೂಲಕ ಬರೆ ಎಳೆಯಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಬೆಲೆ ಏರಿಕೆ ಮಾಡಿರುವುದು ನಗ್ನ ಸತ್ಯ.

ಗ್ಯಾರಂಟಿಗಳಿಗಾಗಿ ಪಕ್ಷದ ಹಣ ಬಳಸಿ. ಸಾಮಾನ್ಯ ಕುಟುಂಬಗಳನ್ನು ಬಲಿ ಕೊಡಬೇಡಿ ಎಂದು ಅಂಬೆಕಲ್ಲು ಸಲಹೆ ನೀಡಿದ್ದಾರೆ. ಕೂಡಲೇ ಡೀಸೆಲ್ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಟ್ಯಾಕ್ಸಿಗಳಿಗೆ ಡೀಸೆಲ್ ಸಬ್ಸಿಡಿ ನೀಡಿ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರವನ್ನು ಆಗ್ರಹಿಸಿದ್ದಾರೆ

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ