ಬಂಟ್ವಾಳದಲ್ಲಿ ವಿಶಿಷ್ಟ ರೀತಿಯಲ್ಲಿ ಹುಟ್ಟು ಹಬ್ಬದ ಸಂಭ್ರಮ; ಸುರಭಿ ವೈಷ್ಣವಿ ಗೋ ಮಂದಿರದಲ್ಲಿ ಆಚರಣೆ

ಬಂಟ್ವಾಳ : ಈಗಿನ ಕಾಲಘಟ್ಟದಲ್ಲಿ ಹುಟ್ಟುಹಬ್ಬದ ದಿನವನ್ನು ಪಾಶ್ಚಾತ್ಯ ರೀತಿಯಲ್ಲಿ ಆಚರಿಸುತ್ತಿರುವವರ ಮಧ್ಯೆ ವಿಶೇಷವಾಗಿ ಗೋಶಾಲೆ (ಗೋಮಂದಿರ)ದಲ್ಲಿ ಮಗುವಿನ ಹುಟ್ಟು ಹಬ್ಬವನ್ನು ಆಚರಿಸಿ ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳ ಪುತ್ರ ಶಿವಾಂಶ್ ಇವರ ಎರಡನೇ ವರ್ಷದ ಜನ್ಮದಿನಚರಣೆಯನ್ನು 22-08-2024 ರಂದು ಬೆಂಜನಪದವು ರಾಮನಗರದಲ್ಲಿರುವ ಸುರಭಿ ವೈಷ್ಣವಿ ಗೋ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸತ್ಸಂಗ, ದೇಶಿಗೋವುದಾನ, ಗೋವುಗಳಿಗೆ ಆರತಿ ಬೆಳಗಿ ಅವಲಕ್ಕಿ, ಬೆಲ್ಲ, ಫಲವಸ್ತು ಸಮರ್ಪಿಸಿ ಗೋಪೂಜೆ ಮಾಡಿ ಅನ್ನದಾನ ನೀಡಿ ಆರಾಧಿಸುವ ಮೂಲಕ ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಹಿಂದೂ ಸಮಾಜಕ್ಕೆ ಮಾದರಿಯಾದರು.

Related posts

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours