ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ ವತಿಯಿಂದ ‘ಆನೆಕಾಲು ರೋಗ’ದ ರಕ್ತ ಲೇಪನ ಶಿಬಿರ

ಮಣಿಪುರ : ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ ಇದರ ವತಿಯಿಂದ ‘ಆನೆಕಾಲು ರೋಗ (ಫೈಲೇರಿಯಾ)ದ ರಕ್ತ ಲೇಪನ ಶಿಬಿರ’ ಜುಲೈ 18ರಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮರ್ಣೆಯಲ್ಲಿ ಜರುಗಿತು.

ಪಿ.ಹೆಚ್.ಸಿ.ಒ. ಶ್ರೀಮತಿ ತಾರಾ, ಸಿ.ಹೆಚ್.ಒ. ಶನಲ್ ಸುಪ್ರಿಯಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ನವ್ಯಾ, ಶ್ರೀಮತಿ ಮೋಹಿನಿ, ಶ್ರೀಮತಿ ಪ್ರತಿಭಾ ಇವರು ಶಿಬಿರವನ್ನು ನೆರವೇರಿಸಿದರು.

ಗ್ರಾಮ ಪಂಚಾಯಿತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಪದ್ಮನಾಭ ನಾಯಕ್, ವಾಣಿ ಇವರು ಹಾಜರಿದ್ದು, ಸಹಕರಿಸಿದರು.

ಸುಮಾರು ನೂರಕ್ಕೂ ಹೆಚ್ಚು ಗ್ರಾಮಸ್ಥರಿಂದ ರಕ್ತದ ಮಾದರಿ ಸಂಗ್ರಹಿಸಲಾಯಿತು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ