ತುಳುಕೂಟ ವತಿಯಿಂದ ಉಡುಪಿಯಲ್ಲಿ “ಆಟಿಡೊಂಜಿ ದಿನ”

ಉಡುಪಿ : ಉಡುಪಿಯ ತುಳುಕೂಟ ಸಂಘಟನೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಿತು. ಆಷಾಢ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯ ರಸ ತೆಗೆದು ಕಷಾಯ ಮಾಡಿ ಕುಡಿಯುವುದು ತುಳುನಾಡಿನ ಸಂಪ್ರದಾಯ. ಮಳೆಗಾಲದಲ್ಲಿ ಆರೋಗ್ಯ ವೃದ್ಧಿಗಾಗಿ, ರೋಗ ರುಜಿನಗಳು ಬಾಧಿಸದಂತೆ ಈ ಕಷಾಯ ರಕ್ಷಾ ಕವಚವಾಗಿದೆ.

ರೈಲ್ವೆ ಸ್ಟೇಷನ್ ರಸ್ತೆಯ ಜಯಸಿಂಹ ಲಯನ್ಸ್ ಭವನದಲ್ಲಿ ಆಟಿ ಅಮಾವಾಸ್ಯೆ ಕಷಾಯ ಕುಡಿಯುವ ಅವಕಾಶವನ್ನು ಸಾರ್ವಜನಿಕರಿಗೆ ತುಳಕೂಟ ಕಲ್ಪಿಸಿ ಕೊಟ್ಟಿತು. ತುಳುಕುಟ ಸಂಘಟನೆ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನೂರಾರು ಜನ ಈ ಸಂದರ್ಭದಲ್ಲಿ ಆಟಿ ಕಷಾಯವನ್ನು ಕುಡಿದರು. ಕಷಾಯದ ಜೊತೆ ಮೆಂತೆ ಗಂಜಿ, ಮೆಂತೆ ಲಡ್ಡು, ಜಾರಿಗೆ ಹುಳಿಯನ್ನು ವಿತರಿಸಲಾಯಿತು. ಕಷಾಯ ತಯಾರಿಸಿದ ಕೃಷ್ಣಶೆಟ್ಟಿಗಾರ್ ಕುಟುಂಬಕ್ಕೆ ಈ ಸಂದರ್ಭದಲ್ಲಿ ತುಳುಕುಟ ಸನ್ಮಾನಿಸಿತು.

ಇದೇ ಸಂದರ್ಭದಲ್ಲಿ ಇಂದ್ರಾಳಿ ದೇವಸ್ಥಾನಕ್ಕೆ ಅಪರೂಪದ ರುದ್ರಾಕ್ಷಿ ಗಿಡವನ್ನು ಸಮರ್ಪಣೆ ಮಾಡಲಾಯಿತು.‌

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!