ತುಳುಕೂಟ ವತಿಯಿಂದ ಉಡುಪಿಯಲ್ಲಿ “ಆಟಿಡೊಂಜಿ ದಿನ”

ಉಡುಪಿ : ಉಡುಪಿಯ ತುಳುಕೂಟ ಸಂಘಟನೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಿತು. ಆಷಾಢ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯ ರಸ ತೆಗೆದು ಕಷಾಯ ಮಾಡಿ ಕುಡಿಯುವುದು ತುಳುನಾಡಿನ ಸಂಪ್ರದಾಯ. ಮಳೆಗಾಲದಲ್ಲಿ ಆರೋಗ್ಯ ವೃದ್ಧಿಗಾಗಿ, ರೋಗ ರುಜಿನಗಳು ಬಾಧಿಸದಂತೆ ಈ ಕಷಾಯ ರಕ್ಷಾ ಕವಚವಾಗಿದೆ.

ರೈಲ್ವೆ ಸ್ಟೇಷನ್ ರಸ್ತೆಯ ಜಯಸಿಂಹ ಲಯನ್ಸ್ ಭವನದಲ್ಲಿ ಆಟಿ ಅಮಾವಾಸ್ಯೆ ಕಷಾಯ ಕುಡಿಯುವ ಅವಕಾಶವನ್ನು ಸಾರ್ವಜನಿಕರಿಗೆ ತುಳಕೂಟ ಕಲ್ಪಿಸಿ ಕೊಟ್ಟಿತು. ತುಳುಕುಟ ಸಂಘಟನೆ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನೂರಾರು ಜನ ಈ ಸಂದರ್ಭದಲ್ಲಿ ಆಟಿ ಕಷಾಯವನ್ನು ಕುಡಿದರು. ಕಷಾಯದ ಜೊತೆ ಮೆಂತೆ ಗಂಜಿ, ಮೆಂತೆ ಲಡ್ಡು, ಜಾರಿಗೆ ಹುಳಿಯನ್ನು ವಿತರಿಸಲಾಯಿತು. ಕಷಾಯ ತಯಾರಿಸಿದ ಕೃಷ್ಣಶೆಟ್ಟಿಗಾರ್ ಕುಟುಂಬಕ್ಕೆ ಈ ಸಂದರ್ಭದಲ್ಲಿ ತುಳುಕುಟ ಸನ್ಮಾನಿಸಿತು.

ಇದೇ ಸಂದರ್ಭದಲ್ಲಿ ಇಂದ್ರಾಳಿ ದೇವಸ್ಥಾನಕ್ಕೆ ಅಪರೂಪದ ರುದ್ರಾಕ್ಷಿ ಗಿಡವನ್ನು ಸಮರ್ಪಣೆ ಮಾಡಲಾಯಿತು.‌

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ