ಮಣ್ಣಿನ ಪ್ರತಿಕೃತಿ ಹರಕೆಯ ಪ್ರಸಿದ್ಧ ಕ್ಷೇತ್ರ ಸುರ್ಯ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಹಿತ ಭೇಟಿ

ಬೆಳ್ತಂಗಡಿ : ಮಣ್ಣಿನ ಪ್ರತಿಕೃತಿ ಹರಕೆಗೆ ಪ್ರಸಿದ್ಧವೆನಿಸಿರುವ ಕರಾವಳಿಯ ಪುಣ್ಯಕ್ಷೇತ್ರ ಸುರ್ಯ ಶ್ರೀಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಹಿತ ಭೇಟಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ನಡ ಗ್ರಾಮದ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಯಶ್ ಅವರು ಪತ್ನಿ ನಟಿ ರಾಧಿಕಾ ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾ ನಿರ್ದೇಶಕ ವೆಂಕಟ್ ಜೊತೆಯಲ್ಲಿದ್ದರು. ಬಳಿಕ ಶ್ರೀ ಸದಾಶಿವ ರುದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್ ಕುಟುಂಬ ಸಿನಿಮಾದ ಯಶಸ್ಸಿಗೆ ಫಿಲ್ಮ್ ರೀಲ್‌ನ ಮಣ್ಣಿನ ಪ್ರತಿಕೃತಿ ಮತ್ತು ಆರೋಗ್ಯ ಸಮಸ್ಯೆಗೆ ಕುಟುಂಬದ ಮಣ್ಣಿನ ಪ್ರತಿಕೃತಿ ಹರಕೆ ತೀರಿಸಿದರು.

ಶ್ರೀ ಸದಾಶಿವ ರುದ್ರ ದೇವಾಲಯದಲ್ಲಿ ಮಣ್ಣಿನ ಹರಕೆಯೇ ವಿಶೇಷ. ಭಕ್ತರು ಸಂಕಲ್ಪಿಸಿರುವ ಬಯಕೆ ಈಡೇರಿದ್ದಲ್ಲಿ ಅದೇ ರೀತಿಯ ಮಣ್ಣಿನ ಪ್ರತಿಕೃತಿಯನ್ನು ಇಲ್ಲಿ ಹರಕೆಯಾಗಿ ಅರ್ಪಿಸಲಾಗುತ್ತದೆ‌. ಆದ್ದರಿಂದ ಯಶ್ ತಮ್ಮ ಮುಂದಿನ ಸಿನಿಮಾ ಯಶಸ್ಸಿಗೆ ಸಿನಿಮಾ ರೀಲ್‌ನ ಮಣ್ಣಿನ ಪ್ರತಿಕೃತಿ, ಆರೋಗ್ಯ ಸಮಸ್ಯೆ ನಿವಾರಣೆಗೆ ಕುಟುಂಬದ ಪ್ರತಿಕೃತಿಯನ್ನು ಅರ್ಪಿಸಿದರು ಎನ್ನಲಾಗುತ್ತಿದೆ.

ಹೊಸಲುಕ್‌ನಲ್ಲಿ ಮಿಂಚುತ್ತಿರುವ ನಟ ಯಶ್ ಕ್ರೀಂ ಕಲರ್ ಪಂಚೆ ಹಾಗೂ ಶರ್ಟ್ ಧರಿಸಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ನಟ ಯಶ್‌ರನ್ನು ಕಾಣುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಕುಟುಂಬ ಸಹಿತ ಭೇಟಿ ನೀಡಲಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ