ಕೆಲಸಕ್ಕೆoದು ಬೆಂಗಳೂರಿಗೆ ತೆರಳಿದ ಯುವತಿ ನಾಪತ್ತೆ : ಪ್ರಕರಣ ದಾಖಲು

ಉಡುಪಿ : ಮಣಿಪಾಲದಲ್ಲಿ ಸೋಲಾರ್ ಎನರ್ಜಿ ಸೊಲ್ಯೂಷನ್ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತೇನೆoದು ತಿಳಿಸಿ ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸತೀಶ ಎಂಬವರ 25 ವರ್ಷದ ಮಗಳು ಬಿ ಕಾಂ ಪದವಿ ಮುಗಿಸಿ ಮಣಿಪಾಲದಲ್ಲಿ ಸೋಲಾರ್ ಎನರ್ಜಿ ಸೊಲ್ಯೂಷನ್ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, 2024 ಜುಲೈ 14 ರಂದು ಆಕೆಯು ಕೆಲಸ ಮಾಡುತ್ತಿದ್ದ ಮಣಿಪಾಲ ಕಂಪೆನಿಯವರು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿ ನಿಟ್ಟೂರಿನ ಬಾಡಿಗೆ ಮನೆಯಿಂದ ಬೆಂಗಳೂರಿಗೆ ಹೋಗಿರುತ್ತಾರೆ.

ಬೆಂಗಳೂರಿಗೆ ಹೋಗಿ 2-3 ದಿನಗಳ ನಂತರ ಪಿರ್ಯಾದಿದಾರರು ಮಗಳಿಗೆ ಪೋನ್ ಕರೆ ಮಾಡಿದಾಗ ಬ್ಯುಸಿ ಇದ್ದೇನೆ ಎಂದು ಆಮೇಲೆ ಪೋನ್ ಮಾಡುದಾಗಿ ತಿಳಿಸಿರುತ್ತಾರೆ. ಮತ್ತೆ 2-3 ದಿನಗಳ ನಂತರದಿಂದ ಈವರೆಗೂ ಆಕೆಯ ಮೊಬೈಲ್ ನಂಬ್ರ 63##172### ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಒಳ ಬರುವ ಕರೆಗಳನ್ನು ನಿಷೇಧಿಸಿದೆ ಎಂಬುದಾಗಿ ಬರುತ್ತಿರುವುದಾಗಿದೆ.

ಈ ಬಗ್ಗೆ ಯುವತಿಯ ತಂದೆ ಸತೀಶ್ ತನ್ನ ಮಗಳು ಈ ಹಿಂದೆ ಕೆಲಸ ಮಾಡುತ್ತಿದ್ದ ಮಣಿಪಾಲ ಕಂಪೆನಿಯಲ್ಲಿ ವಿಚಾರಿಸಲಾಗಿ ಆಕೆ ನಮ್ಮ ಕಂಪೆನಿಯಿಂದ ಕೆಲಸ ಬಿಟ್ಟು ಹೋಗಿರುತ್ತಾಳೆ ಎಂದು ತಿಳಿಸಿದ್ದಾರೆ.

ಯುವತಿಯ ತಂದೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ