ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ಸಂಪ್ರದಾಯ

ಕಾರ್ಕಳ : ಆಕಳಿನ ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಇಟ್ಟು ತೂಗುವ ಅಪರೂಪದ ಸಂಪ್ರದಾಯವಿದೆ. ಗೋ ರಕ್ಷಣೆ ಹಾಗೂ ಸಾಕಣೆಯಲ್ಲಿ ಅಪರೂಪದ ಕೆಲಸ ಮಾಡುತ್ತಿರುವ ಕಾರ್ಕಳದ ಅನಂತಕೃಷ್ಣ ಗೋಶಾಲೆಯಲ್ಲಿ ಗೊಕರುವಿಗೆ ಧೋಳಾರೋಹಣ ಸೇವೆ ನೆರವೇರಿತು.

ಹರಕೆಯ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ. ತೊಟ್ಟಿಲು ಸೇವೆಯಿಂದ ಸಂಗ್ರಹವಾಗುವ ಹಣವನ್ನು ಗೋಶಾಲೆಯ ವೆಚ್ಚಗಳಿಗೆ ಬಳಸಲಾಗುತ್ತದೆ. ಪುಟ್ಟ ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ದೃಶ್ಯ ಕಣ್ಮನ ಸೆಳೆಯುತ್ತದೆ. ಅನೇಕ ಮಂದಿ ಹರಕೆಯ ರೂಪದಲ್ಲಿ ಈ ಸೇವೆ ನಡೆಸುತ್ತಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ