ಬ್ಯಾಂಕ್‌ ಹೆಸರಿನಲ್ಲಿ ಕರೆಮಾಡಿ ವ್ಯಕ್ತಿಗೆ 76,000 ರೂ. ವಂಚನೆ

ಕಾರ್ಕಳ : ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿ ವ್ಯಕ್ತಿಯೋರ್ವರಿಗೆ 76,000 ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಸಬಾ ಗ್ರಾಮದ ಬಾಲಚಂದ್ರ ಎಂಬವರು ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕಿನಲ್ಲಿ ಕ್ರೆಡಿಟ್‌ ಕಾರ್ಡ್‌ನ್ನು ಹೊಂದಿದ್ದು, ಸೆ. 30ರಂದು ಅವರಿಗೆ ಮನುಜ್‌ ಶರ್ಮಾ ಎಂಬವರು ಕರೆ ಮಾಡಿ HDFC ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿರುವುದಾಗಿ ತಿಳಿಸಿರುತ್ತಾರೆ.

ಮನುಜ್‌ ಶರ್ಮಾ ಬಾಲಚಂದ್ರ ಅವರಿಂದ ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕಿನ ವಿವರಗಳನ್ನು ಪಡೆದು ನಂತರ ಒಟಿಪಿಯನ್ನು ಪಡೆದಿರುತ್ತಾರೆ.

ಅ.1ರಂದು ಸಂಜೆ 4 ಗಂಟೆಯಿಂದ 6.30ರ ಮಧ್ಯಾವಧಿಯಲ್ಲಿ ಬಾಲಚಂದ್ರ ಅವರ ಖಾತೆಯಿಂದ ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಮೂಲಕ 76,188 ರೂ. ಕಡಿತವಾಗಿರುತ್ತದೆ.

ಈ ಕುರಿತು ಬಾಲಚಂದ್ರ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ