ಕರ್ನಾಟಕ ಉದರ ಶಸ್ತ್ರಚಿಕಿತ್ಸಾ ಮತ್ತು ಜಿಐ ಅಂಕೋಸರ್ಜನ್‌ಗಳ ಸಂಘದ (KASGO) 3ನೇ ವಾರ್ಷಿಕ ಸಮ್ಮೇಳನ

ಮಂಗಳೂರು : ಕರ್ನಾಟಕ ಉದರ ಶಸ್ತ್ರಚಿಕಿತ್ಸಾ ಮತ್ತು ಜಿಐ ಅಂಕೋಸರ್ಜನ್‌ಗಳ ಸಂಘದ (KASGO) 3ನೇ ವಾರ್ಷಿಕ ಸಮ್ಮೇಳನವನ್ನು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಸನ್ ಸೆಂಟರ್‌ನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಆಯೋಜಿಸಲಾಗುತ್ತಿದೆ ಎಂದು kasgocon ನ ಸಂಘಟನ ಕಾರ್ಯದರ್ಶಿ ಡಾ ರೋಹನ್ ಶೆಟ್ಟಿ ತಿಳಿಸಿದರು.

ಯಕೃತ್ತು-ಮೇದೋಜೀರಕ-ಪಿತ್ತಕೋಶ ವ್ಯವಸ್ಥೆ ಎಂಬ ಸಮ್ಮೇಳನದ ವಿಷಯವಿರುತ್ತದೆ. ಈ ಪ್ರತಿಷ್ಠಿತ ಶೈಕ್ಷಣಿಕ ಕಾರ್ಯಕ್ರಮವು ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಪಿತ್ತಕೋಶ ಶಸ್ತ್ರಚಿಕಿತ್ಸೆಗಳಲ್ಲಿ ಇತ್ತೀಚಿನ ಪ್ರಗತಿಗಳನ್ನು ಕೇಂದ್ರೀಕರಿಸುತ್ತದೆ. ವಿಶೇಷವಾಗಿ ಕ್ಯಾನ್ಸರ್‌ನ ಚಿಕಿತ್ಸೆಗೆ ಒತ್ತು ನೀಡುತ್ತದೆ. ಒಂದೂವರೇ ದಿನಗಳ ಕಾಲ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಜ್ಞರು ಕ್ಯಾನ್ಸರ್ ಚಿಕಿತ್ಸೆಗಳು, ಸೌಮ್ಯ ರೋಗಗಳು ಮತ್ತು ಯಕೃತ್ತು ಪ್ರತಿರೋವಣಗಳಂತಹ ವಿವಿಧ ಶಸ್ತ್ರಚಿಕಿತ್ಸೆಗಳ ಕುರಿತು ತಮ್ಮ ತಜ್ಞತೆಯನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಶ್ರೇಷ್ಠ ತಜ್ಞರುಗಳಿಂದ ವಿಚಾರ ಮಂಡನೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಇ-ಪೋಸ್ಟರ್ ಪ್ರಸ್ತುತಿ. ಲ್ಯಾಪರೊಸ್ಕೋಪಿಕ್ ಸ್ಯುಚರ್ ಮತ್ತು ಬೊವೆಲ್ ಅನಾಸ್ತೋಮೋಸಿಸ್ ಕುರಿತ ಜೀವನ ಕೈಗಾರಿಕಾ ಕಾರ್ಯಾಗಾರ ಪ್ರಮುಖ ವಿಷಯಗಳಾಗಿದೆ ಎಂದರು.

ದೇಶದಾದ್ಯಾಂತದಿಂದ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಸಮ್ಮೇಳನವು ಶಸ್ತ್ರಚಿಕಿತ್ಸಾ ಉದರಶಾಸ್ತ್ರ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಈ ವರ್ಷದ ಪ್ರಮುಖ ಶೈಕ್ಷಣಿಕ ಘಟನೆಗಳಲ್ಲಿ ಒಂದಾಗಲಿದೆ ಎಂದರು.

ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಇ-ಪೋಸ್ಟರ್ಗಳ ಪ್ರಸ್ತುತಿ ಮತ್ತು ಲ್ಯಾಪರೊಸ್ಕೋಪಿಕ್ ಹೊಲಿಗೆ ಮತ್ತು ಕರುಳಿನ ಅನಾಸ್ಪೋಮೊಸಿಸ್ತಾಗಿ ನೇರ ಅನುಭವದ ಕಾರ್ಯಗಾರಗಳು ಇರಲಿವೆ ಎಂದರು.

ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆಯ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್, ಗೌರವ ಅತಿಥಿಗಳಾಗಿ ದೇಶದ ಪ್ರಸಿದ್ಧ ಶಸ್ತ್ರಚಿಕಿತ್ಸಕ ಡಾ. ಪಲಾನಿವೇಲು ಸಿ, ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೋ ಮತ್ತು ಡಾ. ಅಶೋಕ್ ಕುಮಾರ್ ಹಿರಿಯ ನಿರ್ದೇಶಕರು, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ಭಾಗಿಯಾಗಲಿದ್ದಾರೆ ಎಂದರು.

Related posts

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours